Friday, May 8, 2009

ಸ್ವಾರ್ಥ v/s ತ್ಯಾಗ

ಸರಿಸುಮಾರು ಸಂಜೆಯ ಆರು ಗಂಟೆಯ ಸಮಯ. ದಿನವೆಲ್ಲಾ ಭೂಮಿಯನ್ನು ಸುಟ್ಟು- ಸುಟ್ಟು ಕೊನೆಗೆ ತಾನೇ ತಂಪಾಗಿ ಭೂಮಿಯನ್ನು ತಂಪು ಮಾಡಿದ ಸೂರ್ಯ ಭೂಮಿಗೊಂದು ನಮನ ಸಲ್ಲಿಸಿ ಮೋಡದ ಮರೆಯಲ್ಲಿ ಕೊನೆಯಾಗುತ್ತಿದ್ದಾನೆ. ಏಲ್ಲಾ ಜನರು ತಮ್ಮ ದಿನದ ಕೆಲಸ ಮುಗಿಸಿ ಮನೆಗೆ ಹೊರಡಲು ಹತೊರೆಯುತ್ತಿದ್ದಾರೆ. ಪಕ್ಷಿ ಸಂಕುಲವೆಲ್ಲಾ ದಿನದ ಪಯಣ ಮುಗಿಸಿ ಗುಡಿಗೆ ಹೋಗುತ್ತಾ ಚಿಲಿ-ಪಿಲಿ ನಾದವನ್ನು ಹೊರಡಿಸಿವೆ. ಇವೆಲ್ಲದರ ಮಧ್ಯ ಮೆತ್ತನೆ ಹುಲ್ಲುಹಾಸಿನ ಮೇಲೆ ಕುಳಿತ ಅವಳ ಮುಖದಲ್ಲಿ ಯಾರನ್ನೋ ನಿರೀಕ್ಷಿಸುವ ಭಾವವಿತ್ತು. ಚಂದ್ರನ ಮುಖದಂತಿರುವ ಅವಳನ್ನು ದೇವರು ತುಂಬಾ ಸಮಯ ತಗೆದುಕೊಂಡು ಸ್ರಷ್ಟಿಸಿದ್ದಾನೆ. ಅನಿಸುತ್ತೆ. ಅವಳ ಆ ನೀಳಕಾಯ, ಅವಳ ಮುಂಗುರುಳು ಅವಳ ಕೆನ್ನೆಗೆ ಮುತ್ತಿಡುತ್ತಿದ್ದರೆ ಅವಳ ಅವಳ ಉದ್ದವಾದ ರೇಶ್ಮೆಯಂತಿರುವ ಕೂದಲುಗಳು ತುದಿ ಮಾತ್ರ ತಾನು ಯೆನು ಕಡಿಮೆ ಅಂತ ಪಾರ್ಕಿನ ಹುಲ್ಲುಹಾಸಿಗೆ ಮುತ್ತಿಡುತ್ತಿತ್ತು. ಅ ಸೌಂದರ್ಯವನ್ನು ಸವಿಯಲು ಮನಸ್ಸಿದ್ದರೂ, ಅವಲ ಮನಸ್ಸು ಬೇರೆ ಯಾರದೋ ಅಗಮನವನ್ನು ನಿರೀಕ್ಷಿಸುತ್ತಿತ್ತು.
ಅವನೇ ಅವಳ ಪ್ರಾಣ, ಜೀವ, ಜೀವದ ಗೆಳೆಯ ಗೌತಮ್.
...................................................
ಹಸಿರು ಹುಲ್ಲು ಹಾಸಿನ ಮೇಲೆ ಬಂಗಾರದ ಬಣ್ಣದ ಆ ಕೈಗಳನ್ನು ಯಾರೋ ಮುಟ್ಟಿದಂತಾಗಿ, ಗೌರಿ, "ಯಾರು? ಓ ಗೌತಮ್!!" ಎಂದು ನುಡಿದಳು. ಗೌತಮ್ ಹುಂ... ಎಂದ. ಯಾಕೆ ಗೌರಿ ಕೋಪನಾ? ಅಂದ. ಗೌರಿ... " ಗೌತಮ್, ನೀನಿಲ್ಲದೆ ಒಂದೊಂದು ಕ್ಷಣವು ಒಂದೊಂದು ಯುಗ ಎನಿಸುತ್ತದೆ: ಈ ಕುರುಡಿಯ ಮೇಲೆ ನಿನಗೆ ಅದೆಷ್ಟು ಪ್ರೀತಿ?
"ಗೌರಿ, ಪ್ಲೇಸ್ ಇನೊಂದ್ಸಲ ನೀನು ನಿನ್ನನು ಕುರುಡಿ ಎನ್ನಬೇಡ, ನಾನಿಲ್ಲವೆ ನಿನ್ನ ಕಣ್ಣಾಗಿ?"
ಅದೆಷ್ಟೋ ಹೊತ್ತು ಅವಳು ಅವನ ಮಡಿಲಲ್ಲಿ ಮಗುವಾಗಿ ಹೋದಳು. ಸೂರ್ಯ ಪೂರ್ಣವಾಗಿ ಭೂತಾಯಿಯ ಮದಿಲಿನಲ್ಲಿ ಲೀನವಾಗಿ ಕತ್ತಲೆಂಬ ಗೆಳೆಯನಿಗೆ ಅನುಮತಿ ನೀಡಿದ್ದ. ಮೆಲ್ಲಗೆ ಗೌತಮ್ ಗೌರಿಯನ್ನು ಎಬ್ಬಿಸಿ: " ಗೌರಿ, ನನನ್ಗೆ ಹೊಸ್ಟೆಲ್ಗೆ ಹೋಗೋಕೆ ಲೇಟ್ ಆಗುತ್ತೆ, ಎದ್ದೇಳು" ಎಂದ್ ಹೇಳಿ ಅವಳನ್ನು ತನ್ನ ತೋಳತಕ್ಕೆಯಲ್ಲೊಮ್ಮೆ ಬಿಗಿದಪ್ಪಿ, ಕೈ ಹಿಡಿದು ಪಾರ್ಕಿನಿಂದ ಹೊರಬಂದು ಮೊಬೈಕಿನ ಮುಖಕ್ಕೆ ಕೀಲಿ ಸಿಕ್ಕಿಸಿ, ಕಾಲಲ್ಲಿ ಗೇರ್ ಬದಲಿಸುತ್ತ ಬೈಕಿಗೆ ಹೋಗಲು ಅಜ್ಞೆ ಮಾಡಿದ. ಸರಿಸುಮಾರು ೮ ಗಂಟೆಗೆ ಗೌತಮ್ ಮತ್ತು ಗೌರಿಯನ್ನು ಹೊತ್ತ ಬೈಕು ವಿಜಯನಗರದ " ವರ್ಕಿಂಗ್ ವುಮೆನ್ಸ್ ಹೊಸ್ಟೆಲ್" ಬಾಗಿಲಿನ ಹತ್ತಿರ ಬಂದು ನಿಂತಿತು.
...................................................
ಗೌರಿ ತನ್ನ ತಂದೆ-ತಾಯಿಯನ್ನು ಚಿಕ್ಕ ವಯಸ್ಸಿನಲ್ಲೆ ಕಳೆದುಕೊಂಡ ನತದ್ರುಷ್ಟೆ. ಗೆಳತಿಯ ಸಹಯದಿಂದ ದೂರದುರಿನಿನ್ದ ಬೆಂಗಳೂರೆಂಬ ಮಾಯನಗರಿಗೆ ಬಂದು ತನ್ನ ಜೀವನೋಪಾಯಕ್ಕೆಂದು ಪ್ರೈವೆಟ್ ಕಂಪನಿಯಲ್ಲಿ ಟೆಲಿಫೋನೆ ಅಪೋರೇಟರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಅವಳು ಬೆಂಗಳೂರಿಗೆ ಬಂದು ಸುಮಾರು ಒಂದು ವರ್ಷವಾಯಿತು. ಈ ಒಂದು ಮಾಯನಗರಿಯಲ್ಲಿ ಅವಳ ಪಾಲಿಗೆ ತನ್ನವರೆಂದು ಇರುವರು ಗೌತಮ್ ಮತ್ತು ಅವಳ ಪ್ರಾಣ ಸ್ನೇಹಿತೆ ಗಾಯತ್ರಿ. ಗೌರಿ ಮತ್ತು ಗಾಯತ್ರಿ ಒಂದೆ ಊರಿನವರು ಮತ್ತು ಒಟ್ಟಿಗೆ ಓದಿದವರು. ಗೌರಿ ಸುಮಾರು ೧೦ ವರ್ಷದವಳಿದ್ದಾಗ ಅಪಘಾತ ಒಂದರಲ್ಲಿ ತನ್ನ ಕಣ್ಣುಗಳನ್ನು ಕಳೆದುಕೊಂಡಳು, ಜೊತೆಗೆ ತನ್ನ ತಂದೆ-ತಾಯಿಯನ್ನು...!. ಅನಾಥೆಯಾದ ಗೌರಿ ಊರಲ್ಲೆ ತನ್ನ ಸಂಬಂಧಿಕರ ಮನೆಯಲ್ಲಿ ೭-೮ ವರ್ಷ ಇದ್ದು ನಂತರ ಗಾಯತ್ರಿಯ ಸಹಾಯದಿಂದ ಬೆಂಗಳೂರಿಗೆ ಬಂದು ಜೀವನ ನೆಡೆಸುತ್ತಿದ್ದಾಳೆ. ಗಾಯತ್ರಿ ಮತ್ತು ಗೌರಿಯ ಸ್ನೇಹ ಬಹಳ ಗಾಢವಾದದ್ದು, ಮತ್ತು ಇಬ್ಬರು ಒಂದೇ ಹೊಸ್ಟೆಲ್ ನಲ್ಲಿ, ಒಂದೇ ರೂಮಿನಲ್ಲಿ - ಒಂದೇ ಜೀವ, ಎರಡು ದೇಹದಂತೆ ಇರುವರು. ಗಾಯತ್ರಿಯು ಕೂಡ ಬೆಂಗಳೂರಿನಲ್ಲೆ ಒಳ್ಳೆ ಕೆಲಸದಲ್ಲಿದ್ದಾಳೆ.
ಗೌತಮ್ ರೂಮಿನಲ್ಲಿ ಮಲಗಿದ್ದಾನೆ. ಆದರೆ ಎಷ್ಟೆ ಪ್ರಯತ್ನಿಸಿದರೂ ನಿದ್ದೆ ಅವನನ್ನು ಅವರಿಸಲಿಲ್ಲ. ಮನಸ್ಸಲೆಲ್ಲಾ ಗೌರಿಯ ಛಾಯೆ, ಅವಳ ನೆನಪಲ್ಲಿ ಅವನಿಗೆ ನಿದ್ದೆಗೆ ಜಾಗವೇ ಇರಲಿಲ್ಲ. ಅವಳಿಲ್ಲದೇ, ಕೊನೆಗೆ ಮಹಡಿಯ ಮೇಲೆ ಬಂದು ಮಲಗಿದ. ಗರಿ ಬಿಚ್ಚಿದ ನವಿಲಿನಂತಿರುವ ನಕ್ಷತ್ರ ರಾಶಿಯನ್ನು ತನ್ನ ಮಡಿಲಲ್ಲೆ ಬಚ್ಚಿಟುಕೊಂಡು ನಿಂತ ಆಕಾಶವನ್ನೇ ನೋಡುತ್ತಾ ಮಲಗಿದ.
ಗೌತಮ್ ಗೌರಿಯನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ. ಅವನ ಮೇಲೆ ಆಕಾಶದಲ್ಲಿಯ ಆ ನಕ್ಷತ್ರ ಪುಂಜದಷ್ಟೇ ವಿಶಾಲ, ಸುಂದರ... ಆದರೆ ಆ ದೇವರನ್ನು ಅವನು ನಿಂದಿಸುವುದು ಒಂದೇ ವಿಷಯಕ್ಕೆ. ಎಲ್ಲಾ ಕೊಟ್ಟು ತನ್ನ ಪ್ರೇಯಸಿಯ ಕಣ್ಣನು ಮಾತ್ರ ಕಿತ್ತಿಕೊಂಡಿದ್ದನು ಆ ದೇವರು. ಆದರೂ ಅವನಿಗೆ ತಾನೇ ತನ್ನ ಗೌರಿಯ ಕಣ್ಣಾಗುವ ಆಸೆ. ಅಂತೆಯೇ ಅವನು ಗೌರಿಗೆ ಯಾವಾಗಲು ಹೇಳುತ್ತಿದ್ದ ಮಾತು " ಗೌರಿ, ನೀನು ಯಾವತ್ತು ದ್ರುಷ್ಟಿಹೀನಳಲ್ಲ. ಎಕೆಂದರೆ ನಿನ್ನ ಕಣ್ಣಾಗಿ ನಾನಿರುವೆ".
...................................................
ಈ ಪ್ರಿತಿಯಲ್ಲಿರುವವರ ಬದುಕೆ ಹೀಗೆ ... ಎಲ್ಲವು ಮರೆಯಲಾಗುವದಿಲ್ಲ ಎಲ್ಲವು ನೆನೆಯಲಾಗುವದಿಲ್ಲ ಯಾವ ಜನ್ಮದ ನಂಟೋ ಏನೋ ಗೌರಿ ಮತ್ತು ಗೌತಮ್ ಇಬ್ಬರ ಹೃದಗಳು ಕಳಚಿಹೋಗಲಾರದಷ್ಟು ಬೆಸೆದು ಹೋಗಿವೆ. ಭೇಟಿಯಾದ ಸ್ವಲ್ಪ ದಿನದಲ್ಲೇ ಇಬ್ಬರ ಮನಸುಗಳ ನಡುವೆ ಪ್ರೀತಿಯೆಂಬ ಸುಬಧ್ರವಾದ ಸೇತುವೆ ಯೊಂದು ನಿರ್ಮಾಣವಾಗಿದೆ. ಹೀಗೆ ಅವರ ಪ್ರೀತಿಯ ಪಯಣ ಸಾಗುತ್ತಿರಲು, ಗೌತಮ್ ಕೆಲಸದ ಮೇಲೆ ಬೇರೆ ಊರಿಗೆ ಹೋಗಬೇಕಾಗಿ ಬಂದು ಗೌರಿಗೆ ಒಂದು ವಾರದ ನಂತರ ವಾಪಸ್ಸಾಗುವೆನೆಂದು ಹೇಳಿ ಹೊರಟು ಹೋಗುತ್ತನೆ. ಗೌತಮ್ ಹೋಗಿ ಎರಡು ದಿನಗಳ ನಂತರ ಗೌರಿಯ ಮೊಬೈಲ್ ಗೊಂದು ಕರೆ ಬಂತು. ಅತ್ತ ಕಡೆಯಿಂದ "ಮೆಡಮ್ ನಾನು ಡಾ. ರವಿಕುಮಾರ್ " ಅಂತಾ ಹೇಳಿದಾಗ ಹೇಳಿ ಡಾಕ್ಟರ್ ಎಂದಳು. ಸುಮಾರು ಎರಡು ತಿಂಗಳ ಹಿಂದೆ ಅವಳು ಗೌತಮ್ ನೊಡನೆ ತನ್ನ ಕಣ್ಣು ಪರೀಕ್ಷೆ ಗೆಂದು ಹೋದಾಗ ಅವಳ ದೃಷ್ಟಿ ಬರುವದರ ಬಗ್ಗೆ ಹೇಳಿದ್ದರು. "ಮೇಡಂ ನಿಮಗೊಂದು ಸಂತೋಷದ ಸುದ್ದಿ ನಿಮಗೆ ಕಣ್ಣು ಆಪರೇಷನ್ ಆಗುತ್ತೆ ನಿಮಗೆ ಮತ್ತೆ ದೃಷ್ಟಿ ಬರುತ್ತೆ. " ಎಂದರು. ಗೌರಿಗೆ ಎಲ್ಲಿಲ್ಲದ ಸಂತೋಷ ಗೆಳತಿಯೊಡನೆ ಅಂದೆ ಆಸ್ಪತ್ರೆಗೆ ಅಡ್ಮಿಟ್ ಆದಳು. ದೇವರ ದಯೆಯಿಂದ ಗೌರಿಗೆ ದೃಷ್ಟಿ ಬಂತು.
...................................................
ಅದೋಂದು ದಿನ ಗೌತಮ್ ಗಾಗಿ ಗೌರಿ ಅದೇ ಪಾರ್ಕಿನಲ್ಲಿ ತನ್ನ ಜೀವದ ಗೆಳೆಯನಿಗಾಗಿ ಕಾದು ಕೂತಳು. ಅವನಿಗೆ ಸರ್ಪ್ರೈಸ್ ಕೋಡಲೆಂದು ತನಗೆ ಆಪರೇಷನ್ ಆದ ಸುದ್ದಿಯನ್ನು ಹೇಳಿರಲಿಲ್ಲ. ಮರುಕ್ಷಣದಲ್ಲಿ ಅಲ್ಲಿಗೆ ಬಂದ ಗೌತಮ್ ನನ್ನು ಕಂಡು ಅವಳಿಗೆ ದಿಭ್ರಮೆ ಯಾಯಿತು. ತಾನು ಅನುಭವಿಸಿದ ಅಂಧತ್ವ ವನ್ನು ಈಗ ಗೌತಮ್ ಅನುಭವಿಸುತ್ತಿದ್ದಾನೆ ಎಂದು ತಿಳಿದ ಅವಲು ಅವನನ್ನು ದೂರ ಮಾಡಿಅದಳು. ಇದು ಅವಳ ಸ್ವಾರ್ಥವೋ ಅಥವಾ ಅವ್ಳು ಅನುಭವಿಸಿದ ಕಷಟಗಳನ್ನು ನೆನೆದು ಈ ನಿರ್ಧಾರ ತೆಗೆದುಕೋಂಡಳೊ ಗೊತ್ತಿಲ್ಲ. ಅಂತೂ ಅಲ್ಲಿಗೆ ಅವರಿಬ್ಬರ ಆ ಪ್ರೀತಿಯ ಕೊಂಡಿ ಕಳಚಿ ಬಿತ್ತು..
...................................................
ಗೌತಮ್ ಎಷ್ಟೆ ಗೋಗರೆದರೂ ಗೌರಿ ತನ್ನ ನಿರ್ಧಾರ ವನ್ನು ಬದಲಿಸಲಿಲ್ಲ. ಅದೋಂದು ದಿನ ಗೌತಮ್ ಅವಳಿಗಾಗಿ ಪಾರ್ಕಿನಲ್ಲಿ ಕಾಯುತ್ತಿರುವಾಗ ಅಲ್ಲಿಗೆ ಬಂದ ಗೌರಿ ಹೇಳುತ್ತಾಳೆ "ನಾನು ಸಂತೋಷವಾಗಿರಬೇಕೆಂದು ನೀನು ಬಯಸುವದಾದರೆ, ನನ್ನ ಜೀವನದಿಂದ......... ನನ್ನ ಮನಸಿನಿಂದ ............. ದೂರ ಹೋಗಿಬಿಡು" ಎನ್ನುತ್ತಾಳೆ. ಅವಳ ಮಾತನ್ನು ಕೇಳಿದ ಗೌತಮ್ " ಗೌರಿ ನನಗೆ ನಿನ್ನ ಸಂತೋಷಕ್ಕಿಂತ ಹೆಚ್ಚಿನದೇನಿದೆ? ನಿಇನು ಹೇಲಿದಂತೆ ನಾನು ನಿನ್ನಿಂದ ದೂರ ಹೋಗುತ್ತೇನೆ" ಎಂದು ಹೇಳಿ ಕಣ್ಣಿಲ್ಲದ ಕಣ್ಣಲ್ಲಿ ನೀರು ಸುರಿಸುತ್ತಾ ಹೋಗುತ್ತನೆ. ಹೋಗುವಾಗ ಕೊನೆಯದ್ದಗಿ ಹೇಳುತ್ತಾನೆ " ಗೌರಿ ನಾನು ಅಂದು ನಿನಗೆ ನೀಡಿದ ಮಾತನ್ನು ನೆಡೆಸಿಕೊಟ್ಟಿದ್ದೇನೆ"(ಗೌರಿ, ನೀನು ಯಾವತ್ತು ದ್ರುಷ್ಟಿಹೀನಳಲ್ಲ. ಎಕೆಂದರೆ ನಿನ್ನ ಕಣ್ಣಾಗಿ ನಾನಿರುವೆ). ನೀ ಎಲೇ ಇರು ಹೇಗೆ ಇರು ಚೆನ್ನಗಿರು........ ಹಾಗೆ "ಪ್ಲೀಸ್ ಟೇಕ್ ಕೇರ್ ಆಫ್ ಮೈ ಆಯಿಸ್".
...................................................
ಘೌತಮ್ ಹೇಳಿದ ಕೊನೆಯ ಮಾತನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಗೌರಿಯ ಮುಂದಿದ್ದ ಗೌತಮ್ ಹೊರಟು ಹೋಗಿದ್ದ. ಅವನನ್ನೆ ನೋಡುತ್ತ ನಿಂತ ಗೌರಿಯ ಅಲ್ಲ............ ಗೌತಮ್ ನ ಕಣ್ಣಲ್ಲಿ ನೀರು ಸುರಿಯುತ್ತಿತ್ತು.....

No comments:

Post a Comment